ಕೃಷ್ಣ ಜಯಂತಿ ಸಂಗೀತೋತ್ಸವ
ಗಾನಭಾರತೀ ಸಂಗೀತ ಸಭೆ ಸೆಪ್ಟೆಂಬರ್ 7, 8 ಹಾಗೂ 9ರಂದು ಕೃಷ್ಣ ಜಯಂತಿ ಸಂಗೀತೋತ್ಸವವನ್ನು ಹಮ್ಮಿಕೊಂಡಿದೆ. ಪ್ರಖ್ಯಾತ ಹಿರಿಯ ಹಾಗೂ ಕಿರಿಯ ಕಲಾವಿದರು ಸಂಗೀತ ನೃತ್ಯ ಕಾರ್ಯಕ್ರಮ ನೀಡಲಿದ್ದಾರೆ. ಅದೇ ಸಂದರ್ಭದಲ್ಲಿ ಸಂಗೀತ ಕ್ಷೇತ್ರದಲ್ಲಿ ಸೇವೆ ಮಾಡಿದ ನಾಲ್ಕು ಹಿರಿಯರನ್ನು ಸನ್ಮಾನಿಸಲಾಗುತ್ತದೆ.
ಕೊಳಲು ಕಾರ್ಯಕ್ರಮ
7 ಸೆಪ್ಟೆಂಬರ್ ಸಂಜೆ 6 ಗಂಟೆಗೆ ಈಗಾಗಲೇ ದೇಶ ವಿದೇಶಗಳಲ್ಲಿ ಹೆಸರು ಮಾಡಿರುವ ಚೆನ್ನೈನ ಯುವ ಕಲಾವಿದ ವಿದ್ವಾನ್ ಜೆ ಎ ಜಯಂತ್ ಅವರ ಕೊಳಲುವಾದನ ಕಾರ್ಯಕ್ರಮವಿರುತ್ತದೆ. ಅವರೊಂದಿಗೆ ವಯೋಲಿನಿನಲ್ಲಿ ವಿದ್ವಾನ್ ವಿಠ್ಠಲ ರಂಗನ್, ವಿದ್ವಾನ್ ಕೆ ಯು ಜಯಚಂದ್ರರಾವ್ ಅವರು ಮೃದಂಗದಲ್ಲಿ ಹಾಗೂ ವಿದ್ವಾನ್ ಎಸ್ ಮಂಜುನಾಥ್ ಅವರು ಘಟದಲ್ಲಿ ಸಹಕರಿಸಲಿದ್ದಾರೆ.
7 September, 6 PM - Vidwan J.A.Jayanth - Flute, Vidwan K.U.Jayachandra Rao- Mrudangam, Vidwan S.Manjunath- Ghatam
ಹಿಂದುಸ್ತಾನಿ ಗಾಯನ
8 ಸೆಪ್ಟೆಂಬರ್ ರಂದು ಸಂಜೆ 6 ಗಂಟೆಗೆ ವಿದುಷಿ ಕಲ್ಪನಾ ಸುಮಂತ್ ಅವರ ಹಿಂದುಸ್ತಾನಿ ಗಾಯನ ಕಾರ್ಯಕ್ರಮವಿರುತ್ತದೆ. ಗ್ವಾಲಿಯರ್ ಘರಾನೆಯ ಪ್ರಖ್ಯಾತ ಗಾಯಕಿ ವೀಣಾ ಸಹಸ್ರಬುದ್ಧೆ ಹಾಗೂ ಶ್ರೀಮತಿ ಅದಿತಿ ಉಪಾಧ್ಯಾಯ ಅವರ ಶಿಷ್ಯರಾದ ಇವರು ಈಗಾಗಲೇ ಸಂಗೀತ ಕ್ಷೇತ್ರದಲ್ಲಿ ದೊಡ್ಡ ಹೆಸರು ಮಾಡಿದ್ದಾರೆ. ಪ್ರತಿಷ್ಠಿತ ಸಭೆಗಳಲ್ಲಿ ಕಾರ್ಯಕ್ರಮಗಳನ್ನು ನೀಡಿ ವಿಮರ್ಶಕರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಇವರಿಗೆ ಪಂಡಿತ್ ರಮೇಶ್ ಧನ್ನೂರ್ ಅವರು ತಬಲಾದಲ್ಲಿ ಮತ್ತು ಪಂಡಿತ್ ಶ್ರೀರಾಂ ಭÀಟ್ ಅವರು ಹಾರ್ಮೋನಿಯಂನಲ್ಲಿ ಸಹಕರಿಸಲಿದ್ದಾರೆ.
8 September, 6 PM - Vidhushi Kalpana Sumanth- Vocal | Pandith Ramesh Dhannur- Tabala | Pandith Shreeram Bhat- Harmonium
ಸನ್ಮಾನ ಹಾಗೂ ಭರತನಾಟ್ಯ ಕಾರ್ಯಕ್ರಮ
9 ಸೆಪ್ಟೆಂಬರ್, ಸಂಜೆ 5 ಗಂಟೆಗೆ ಪ್ರಖ್ಯಾತ ಸುಗಮ ಸಂಗೀತ ಕಲಾವಿದರಾದ ವಿದುಷಿ ಹೆಚ್ ಆರ್ ಲೀಲಾವತಿ, ಹಿರಿಯ ಸಂಘಟಕರಾದ ಶ್ರೀ ಲಕ್ಷ್ಮೀನಾರಾಯಣ ಬಾಬು, ಕರ್ನಾಟಕ ಸಂಗೀತ ಕಲಾವಿದರಾದ ವಿದುಷಿ ಕೋವಿಲಡಿ ಕಲಾ ಮತ್ತು ವೀಣಾವಾದಕಿ ವಿದುಷಿ ಎಸ್ ವಿ ರುಕ್ಮಿಣಿ ಇವರುಗಳನ್ನು ಸನ್ಮಾನಿಸಲಾಗುವುದು. ಹಿರಿಯ ಕರ್ನಾಟಕ ಸಂಗೀತ ಕಲಾವಿದೆ ವಿದುಷಿ ಡಾ. ಗೌರಿಕುಪ್ಪುಸ್ವಾಮಿಯವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಸನ್ಮಾನಿತರನ್ನು ಗೌರವಿಸುವರು. ಇದೇ ಸಂದರ್ಭದಲ್ಲಿ ಕೃಷ್ಣ ಜಯಂತಿಯ ಪ್ರಯುಕ್ತ ನಡೆದ ವಿವಿಧ ಸ್ಪರ್ಧೆಗಳಲ್ಲಿ ಬಹುಮಾನ ಪಡೆದವರಿಗೆ ಬಹುಮಾನ ವಿತರಣೆ ಮಾಡಲಾಗುವುದು. ಸಭೆಯ ಅಧ್ಯಕ್ಷರಾದ ಡಾಕ್ಟರ್ ಸಿ ಜಿ ನರಸಿಂಹನ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸುವವರು.
9 September, 6:30 PM - Vidhushi Bhanumathi and Team - Bharathanatya “Krishna Darshana”
ಸನ್ಮಾನ ಕಾರ್ಯಕ್ರಮದ ನಂತರ ಹಿರಿಯ ನೃತ್ಯ ಕಲಾವಿದೆ ವಿದುಷಿ ಬಿ ಭಾನುಮತಿ ಅವರ ತಂಡದಿಂದ ಕೃಷ್ಣ ದರ್ಶನ ಭರತನಾಟ್ಯ ಕಾರ್ಯಕ್ರಮವಿರುತ್ತದೆ.
9 September 2018, Sunday 5:30 PM
Chief Guest
Vidhushi Gowri Kuppuswamy Senior Musician
Speech by Chief Guest and Prize Distribution
Felicitaon to Senior Artists
Vidhushi H.R.Leelavathi, Senior Sugama Sangitha artist
Vidhushi Koviladi R.Kala, Carnatic Music Vocalistt
Sri. Lakshminarayana Babu, Organizer
Vidhushi S.V.Rukmini, Veena Maestro
ವಿಮರ್ಶಾ ಸ್ಪರ್ಧೆ
ಕೃಷ್ಣ ಜಯಂತಿಯ ಸಂಗೀತ ನೃತ್ಯ ಕಾರ್ಯಕ್ರಮಗಳನ್ನು ಕುರಿತಂತೆ ವಿಶೇಷ ವಿಮರ್ಶಾ ಸ್ಪರ್ಧೆಯನ್ನು ಆಯೋಜಿಸಲಾಗಿದೆ. 25ರ ಒಳಗಿನ ವಯೋಮಿತಿಯವರು ಇದರಲ್ಲಿ ಪಾಲ್ಗೊಳ್ಳಬಹುದು. ಇದರಲ್ಲಿ ವಿಜೇತರಾದವರಿಗೆ 1000 ಹಾಗೂ 500 ರೂ. ಬಹುಮಾನವಿರುತ್ತದೆ. ಬಹುಮಾನಿತ ವಿಮರ್ಶೆಯನ್ನು ತಿಲ್ಲಾನದಲ್ಲಿ ಪ್ರಕಟಿಸಲಾಗುತ್ತದೆ.
Attachment | Size |
---|---|
![]() | 1.44 MB |
![]() | 1.5 MB |