ಅರ್ಚನಾ ಹಾಗೂ ಸಮನ್ವಿ ಅವರ ಸಂಗೀತ ಕಾರ್ಯಕ್ರಮ
ಗಾನಭಾರತೀಯಲ್ಲಿ ಅಕ್ಟೋಬರ್ 6. 2018, 6ಗಂಟೆಗೆ ಯುವ ಪ್ರತಿಭಾವಂತ ಕಲಾವಿದರಾದ ವಿದುಷಿ ಅರ್ಚನಾ ಹಾಗೂ ಸಮನ್ವಿ ಅವರ ಕರ್ನಾಟಕ ಶಾಸ್ತ್ರೀಯ ಸಂಗೀತ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಇವರಿಗೆ ವಯೋಲಿನಿನಲ್ಲಿ ವಿದ್ವಾನ್ ಬಿ ಕೆ ರಘು, ಮೃದಂಗದಲ್ಲಿ ವಿದ್ವಾನ್ ಅದಮ್ಯ ರಮಾನಂದ್ ಹಾಗೂ ಘಟದಲ್ಲಿ ವಿದ್ವಾನ್ ರಘುನಂದನ್ ವ್ಯಾಸರಾವ್ ಅವರು ಸಹಕರಿಸಲಿದ್ದಾರೆ.
ಕುಮಾರಿ ಅರ್ಚನಾ ಮತ್ತು ಸಮನ್ವಿ ತೀರಾ ಕಿರಿಯ ವಯಸ್ಸಿನಲ್ಲಿಯೇ ಸಂಗೀತದ ಕಲಿಕೆ ಪ್ರಾರಂಭಿಸಿದರು. ವಿದುಷಿ ವಸಂತಲಕ್ಷ್ಮೀ ಹೆಬ್ಬಾರ್, ಪ್ರೊ ಅರವಿಂದ ಹಬ್ಬಾರ್ ಹಾಗೂ ದಿವಂಗತ ವಿದುಷಿ ರಂಜನಿ ಹೆಬ್ಬಾರ್ ಅವರಲ್ಲಿ ಕಲಿತು, ಈಗ ವಿದ್ವಾನ್ ಸಂಗೀತ ಕಲಾನಿಧಿ ಚಿತ್ರವೀಣಾ ರವಿಕಿರಣ್ ಅವರಲ್ಲಿ ಮುಂದುವರೆಸುತ್ತಿದ್ದಾರೆ. ಜೊತೆಗೆ ವಿದುಷಿ ಶಾಂತಲಾ ಸುಬ್ರಹ್ಮಣ್ಯಂ ಅವರಿಂದಲೂ ಮಾರ್ಗದರ್ಶನ ಪಡೆಯುತ್ತಿ ದ್ದಾರೆ. ಕಿರಿಯ ವಯಸ್ಸಿನಲ್ಲಿಯೇ ಅಪಾರ ಪ್ರಗತಿ ತೋರುತ್ತಿರುವ ಅರ್ಚನಾ ಮತ್ತು ಸಮನ್ವಿಯರು ಕ್ರಮವಾಗಿ ರಾಜ್ಯ ಸಂಗೀತ ನೃತ್ಯ ಅಕಾಡೆಮಿ ಮತ್ತು ಸಿಸಿಆರ್ಟಿ ಶಿಷ್ಯವೇತನ ಪಡೆಯುತ್ತಿದ್ದಾರೆ. ಸಂಗೀತಯಾತ್ರೆ ರಿಯಾಲಿಟಿ ಶೋನಲ್ಲಿ ಇವರಿಬ್ಬರೂ ಕ್ರಮವಾಗಿ ದ್ವಿತೀಯ ಮತ್ತು ಪ್ರಥಮ ಬಹುಮಾನ ಪಡೆದಿದ್ದಾರೆ. ತಮಿಳುನಾಡಿನ ಕಲೆ ಮತ್ತು ಸಂಸ್ಕೃತಿ ಇಲಾಖೆ ನಡೆಸಿದ ಸಂಗೀತ ಸ್ಪರ್ಧೆಯಲ್ಲಿ ಅರ್ಚನ ಪ್ರಥಮ ಬಹುಮಾನ ಪಡೆದಿದ್ದಾಳೆ. ಶಂಕರ ಯುವ ಟಿವಿ ಛಾನೆಲ್ ಮತ್ತು ಕರ್ನಾಟಕ್ ಪ್ರೀಮಿಯರ್ ಲೀಗ್ನ ಸ್ಪಧೆರ್Àಯಲ್ಲಿ ಯುಗಳ ಗಾಯನಕ್ಕಾಗಿ ಪ್ರಥಮ ಬಹುಮಾನ ಗಳಿಸಿದ್ದಾರೆ. ಕಲಿಕೆಯ ಅದಮ್ಯ ಆಸಕ್ತಿಯಿರುವ ಈ ಕಿಶೋರಿಯರು ಖ್ಯಾತ ಕಲಾವಿದರಾದ, ಟಿ ಎನ್ ಶೇಷಗೋಪಾಲನ್, ಎಸ್ ಸೌಮ್ಯ, ನೀಲಾ ರಾಂಗೋಪಾಲ್, ರಂಜನಿ ಗಾಯತ್ರಿ ಮುಂತಾದವರು ನಡೆಸಿರುವ ಸಂಗೀತ ಶಿಬಿರಗಳಲ್ಲಿ ತರಬೇತಿ ಪಡೆದಿದ್ದಾರೆ. ಬೆಂಗಳೂರು, ಚೆನ್ನೈ, ಮಂಗಳೂರು, ಮೈಸೂರು ಮುಂತಾದ ನಗರಗಳ ಪ್ರತಿಷ್ಠಿತ ಸಭೆಗಳಲ್ಲಿ ಕಾರ್ಯಕ್ರಮ ನೀಡಿದ್ದಾರೆ. 2014ರಲ್ಲಿ ಇವರ ಒಂದು ಸಿಡಿ ಕೂಡ ಬಿಡುಗಡೆಯಾಗಿದೆ.
October 6th 2018, 6pm - Vocal by Vidushi Archana & Samanvi
Vid. BK Raghu - Violin
Vid. Adamya Ramanand - Mridanga
Vid. Raghunandan Vyasa Rao - Ghatam